ಹುಬ್ಬಳ್ಳಿ:ಮಲಪ್ರಭಾ ನದಿ ಸೇತುವೆ ಮೇಲೆ ಬುಧವಾರ ತೆಂಗಿನಕಾಯಿ ಎಳನೀರು ಹೊತ್ತು ಸಾಗುತ್ತಿದ್ದ ಕ್ಯಾಂಟರ್ (ಲಾರಿ) ಯೊಂದು ಪಲ್ಟಿಯಾಗಿದೆ.
ರಸ್ತೆಯಲ್ಲಾ ಹರಡಿಕೊಂಡಿದ್ದ ತೆಂಗಿನ ಕಾಯಿ ಹಾಗೂ ಪಲ್ಟಿ ಹೊಡೆದ ಲಾರಿಯನ್ನು ಕ್ರೇನ್ ಮೂಲಕ ತೆರವುಗೊಳಿಸಿ, ಇತರ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಸ್ಥಳಕ್ಕೆ ಸ್ಥಳೀಯ ಉಪಠಾಣೆ ಹಾಗೂ ಕಿತ್ತೂರು ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.