ಲಕ್ನೋ : ಪ್ರವಾದಿ ಪೈಗಂಬರರ ಕುರಿತು ದ್ವೇಷ ಭಾಷಣ ಮಾಡಿದ ದಾಸ್ನಾ ದೇವಿ ದೇವಸ್ಥಾನದ ಯತಿ ನರಸಿಂಗಾನಂದ ಸರಸ್ವತಿ ಅವರನ್ನು ಉತ್ತರ ಪ್ರದೇಶದ ಗಾಝಿಯಾಬಾದ್ ಪೊಲೀಸ್ ಲೈನ್ನಲ್ಲಿ ಶನಿವಾರ ಬಂಧಿಸಲಾಗಿದೆ.
ಶುಕ್ರವಾರ ರಾತ್ರಿ, ಯತಿ ನರಸಿಂಗಾನಂದ ಸರಸ್ವತಿಯವರ ಹೇಳಿಕೆಯನ್ನು ವಿರೋಧಿಸಿ ಗಾಝಿಯಾಬಾದ್ ಮತ್ತು ಪಶ್ಚಿಮ ಉತ್ತರ ಪ್ರದೇಶದ ಭಾಗಗಳಲ್ಲಿ ಮುಸ್ಲಿಂ ಸಮುದಾಯದ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸಿದ್ದರು.
ಗಾಝಿಯಾಬಾದ್ನಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಯತಿ ನರಸಿಂಹಾನಂದ ಸರಸ್ವತಿ ಅವರ ಮೇಲೆ ಅಕ್ಟೋಬರ್ 4 ಶುಕ್ರವಾರದಂದು ಪ್ರಕರಣ ದಾಖಲಿಸಲಾಗಿದೆ.