ಕೋಲಾರದಲ್ಲಿ ಬೆಚ್ಚಿ ಬೀಳಿಸುವ ಘಟನೆ: ಕತ್ತು ಕೊಯ್ದು ಶಿಕ್ಷಕಿ ಬರ್ಬರ ಹತ್ಯೆ

ಕೋಲಾರ : ಕೋಲಾರ ಜಿಲ್ಲೆ ಮುಳಬಾಗಿಲು ನಗರದಲ್ಲಿ ಶಿಕ್ಷಕಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. 42 ವರ್ಷದ ಶಿಕ್ಷಕಿ ದಿವ್ಯಶ್ರೀ ಕೊಲೆಯಾದವರು ಎಂದು ಹೇಳಲಾಗಿದೆ.

ಮುಳಬಾಗಿಲು ನಗರದ ಮುತ್ಯಾಲಪೇಟೆ ಲೇಔಟ್ ನಲ್ಲಿ ಘಟನೆ ನಡೆದಿದೆ. ದಿವ್ಯಶ್ರೀ ಅವರ ಕತ್ತು ಕೊಯ್ದು ಮೂವರು ಹಂತಕರು ಕೊಲೆ ಮಾಡಿದ್ದಾರೆ.

ಮನೆಯಲ್ಲಿ ಮಗಳ ಜೊತೆ ಇದ್ದಾಗಲೇ ಶಿಕ್ಷಕಿಯ ಕೊಲೆ ಮಾಡಲಾಗಿದೆ. ಮಗಳನ್ನು ಕೂಡ ಹತ್ಯೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದು, ಅದೃಷ್ಟವಶಾತ್ ಅವರು ಪಾರಾಗಿದ್ದಾರೆ. ಉದ್ಯಮಿ ಪದ್ಮನಾಭ್ ಪತ್ನಿ ದಿವ್ಯಶ್ರೀ ಮುಡಿಯನೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕೋಲಾರ ಎಸ್.ಪಿ. ನಿಖಿಲ್ ಬಿ., ಶಾಸಕ ಸಮೃದ್ಧಿ ಮಂಜುನಾಥ್ ಭೇಟಿ ನೀಡಿದ್ದಾರೆ. ಎಫ್‌ಎಸ್‌ಎಲ್ ತಂಡ, ಶ್ವಾನದಳ, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕಿ ಹತ್ಯೆಯಿಂದಾಗಿ ಮುಳಬಾಗಿಲು ಜನ ಬೆಚ್ಚಿಬಿದ್ದಿದ್ದಾರೆ.

Latest Indian news

Popular Stories