ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ

ರಾಜ್ಯ ರಾಜಾಧಾನಿಯಲ್ಲಿ ಒಂದು ವಾರದಿಂದ ಹಿಂಗಾರು ಮಳೆ ಚುರುಕಾಗಿದ್ದು, ಮಳೆ ಪರಿಣಾಮ ತರಕಾರಿಗಳ ಬೆಲೆ (Vegetable price hike) ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಈ‌ ವಾರ 10 ರಿಂದ‌ 20 ರೂಪಾಯಿ‌ ಹಚ್ಚಾಗಿದ್ದು,‌ ದೀಪಾವಳಿ ಹಬ್ಬದ ವೇಳೆ‌ಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ತರಕಾರಿಗಳ‌ ಬೆಲೆ‌ಗೆ ಗ್ರಾಹಕರು ಶಾಕ್ ಆಗುತ್ತಿದ್ದಾರೆ.

ಹಿಂಗಾರು ಮಳೆಯ ಪರಿಣಾಮ ತರಕಾರಿಗಳ‌ ಬೆಲೆ ಜಾಸ್ತಿಯಾಗಿದೆ.‌ ಕಳೆದ ವಾರ ಟೊಮೆಟೊ ಬೆಲೆ 50 ರೂ ಇತ್ತು.‌ ಈ ವಾರ 60 ರೂ ಆಗಿದೆ. ಇನ್ನು ಆಲೂಗಡ್ಡೆ ಕಳೆದ ವಾರ 30 ರೂ ಇತ್ತು. ಈ ವಾರ 45 ರೂ ಆಗಿದೆ.‌ ಇನ್ನು ಈರುಳ್ಳಿಯಂತು‌ ಮಾರುಕಟ್ಟೆಯಲ್ಲಿ ಕೆಜಿಗೆ 60 ರೂ ಇದ್ದರೆ, ತಳ್ಳುವ ಗಾಡಿಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದ ಅಂಗಡಿಗಳಲ್ಲಿ 70 ರಿಂದ 100 ರೂ. ರವರೆಗೂ ವ್ಯಾಪಾರವಾಗುತ್ತಿದೆಯಂತೆ.

ಇನ್ನು ಕ್ಯಾರೆಟ್, ಬೀನ್ಸ್, ನಾಟಿ ಬಟಾಣಿ, ಹಸಿರು, ಕ್ಯಾಪ್ಸಿಕಮ್, ಮೆಣಸಿನಗಾಯಿ ಎಲ್ಲವೂ 100 ರ ಗಡಿದಾಟಿವೆ. ಹಿಂಗಾರು ಮಳೆಯ ಪರಿಣಾಮ ತರಕಾರಿಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ದೀಪಾವಳಿ ಹಬ್ಬಕ್ಕೆ ಈ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ವಾರ ತರಾಕಾರಿಗಳ ಬೆಲೆ ಎಷ್ಟೆಷ್ಟು ಅಂತ ನೋಡುವುದಾದರೆ,

ತರಕಾರಿ ಹಿಂದಿನ ಬೆಲೆ ಇಂದಿನ ಬೆಲೆ
ನಾಟಿ ಬೀನ್ಸ್: 120, 80 ರೂ.
ಟೊಮೆಟೊ: 15, 40 ರೂ.
ಬಿಳಿ ಬದನೆ: 60, 40 ರೂ.
ಮೆಣಸಿನ ಕಾಯಿ: 40, 80 ರೂ.
ನುಗ್ಗೆಕಾಯಿ ಕೆಜಿಗೆ: 100 ರಿಂದ 120, ಒಂದಕ್ಕೆ 20 ರೂ.
ಊಟಿ ಕ್ಯಾರೆಟ್: 120, 40ರೂ.
ನವಿಲುಕೋಸು: 40, 40ರೂ.
ಮೂಲಂಗಿ: 40, 40 ರೂ.
ಹೀರೇಕಾಯಿ: 40, 60 ರೂ.
ಆಲೂಗಡ್ಡೆ: 40, 40 ರೂ.
ದಪ್ಪ ಈರುಳ್ಳಿ: 60, 60ರೂ.
ಸಣ್ಣ ಈರುಳ್ಳಿ: 40, 30 ರೂ.
ಕ್ಯಾಪ್ಸಿಕಂ: 40, 40 ರೂ.
ಹಾಗಲಕಾಯಿ: 40, 40 ರೂ.
ಕೊತ್ತಂಬರಿ ಸೊಪ್ಪುಕಟ್: 30 ರೂ.
ಶುಂಠಿ: 150, 150 ರೂ.
ಬೆಳ್ಳುಳ್ಳಿ: 400, 400 ರೂ.
ಪಾಲಕ್ ಕೆಜಿ: 40 ರೂ.
ಪುದಿನ ಸೊಪ್ಪು ಕೆಜಿ: 92 ರೂ.
ನಾಟಿ ಬಟಾಣಿ: 200, 200 ರೂ.
ಫಾರಂ ಬಟಾಣಿ: 100, 100 ರೂ.
ಈ ಬೆಲೆ ಇನ್ನು ಮೂರು ದಿನಗಳು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಸದ್ಯ ಮಳೆ ಇರುವ ಕಾರಣ ಈರುಳ್ಳಿ, ಟೋಮಾಟೋ, ಆಲೂಗಡ್ಡೆ, ಸೇರಿದಂತೆ ಹಲವು ತರಕಾರಿಗಳು ಮಳೆಗೆ ಹಾನಿಯಾಗಿವೆ. ಹೀಗಾಗಿ ತರಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹಾಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ.‌ ಅಲ್ಲದೇ ಇದೀಗ ಮದುವೆ ಸೀಸನ್​ ಆಗಿರುವುದರಿಂದ ತರಕಾರಿಗೆ ಹೆಚ್ಚು ಬೇಡಿಕೆ ಇದೆ‌.

ಆದರೆ ತರಕಾರಿಗಳು ಕಡಿಮೆ ಪೂರೈಕೆಯಾಗುತ್ತಿರುವ ಪರಿಣಾಮ ಬೆಲೆ ಏರಿಕೆಯಾಗಿದೆ. ಹೀಗಾಗಿ ವ್ಯಾಪಾರ ವಹಿವಾಟು‌ ಅಷ್ಟಾಗಿ ನಡೆಯುತ್ತಿಲ್ಲ. ಒಂದು ಕೆಜೆ ತೆಗೆದುಕೊಳ್ಳುವಲ್ಲಿ ಅರ್ಧ ಕೆಜೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ವ್ಯಾಪಾರ ವಹಿವಾಟು‌ ಕಡಿಮೆ ಇದೆ ಅಂತ ವ್ಯಾಪಾರಸ್ಥರಾದ ಮುಬಾರಕ್ ಅವರು ಹೇಳಿದ್ದಾರೆ.

Latest Indian news

Popular Stories