ಸಿದ್ದರಾಮಯ್ಯ ಅವರ ಸ್ವಚ್ಛ ವರ್ಚಸ್ಸು ಜನರಿಗೆ ನಂಬಿಕೆ ಮೂಡಿಸಿತ್ತು – ಶಾಸಕ ಡಾ.ಎಚ್.ಸಿ ಮಹದೇವಪ್ಪ

ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಕರ್ನಾಟಕದ ‌ಮುಂದಿನ ಮುಖ್ಯಮಂತ್ರಿಯಾಗಿ ಕೆಲವೇ ಕ್ಷಣದಲ್ಲಿ ಕಾಂಗ್ರೆಸ್ ಘೋಷಿಸಲಿದೆ. ಈ ನಡುವೆ ಪ್ರತಿಕ್ರಿಯೆ ನೀಡಿದ ಶಾಸಕ ಎಚ್.ಸಿ ಮಹಾದೇವಪ್ಪ ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ಅವರ ಸ್ವಚ್ಛ ವರ್ಚಸ್ಸು ಜನರಲ್ಲಿ ನಂಬಿಕೆ ಮೂಡಿಸಿತ್ತು ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುತ್ತಿರುವುದು ಅತೀವ ಸಂತೋಷ ತಂದಿದೆ. ಈ ಮುಂಚೆ ಐದು ವರ್ಷ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಮೇಲೆ ಜನರ ನಿರೀಕ್ಷೆ ಹೆಚ್ಚಿದೆ. ಉತ್ತಮ ಆಡಳಿತ ನೀಡಲಿ. ಡಬಲ್ ಇಂಜಿನ್ ಸರಕಾರದಿಂದ ಬೆಸೆತ್ತ ಜನ ಕಾಂಗ್ರೆಸ್’ಗೆ ಮತ ಹಾಕಿದ್ದಾರೆ ಎಂದರು.

ಡಿಕೆ ಶಿವ ಕುಮಾರ್ ಅವರು ಸಮರ್ಥವಾಗಿ ಸಂಘಟಿತವಾಗಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

Latest Indian news

Popular Stories