ಭಾರೀ ಮಳೆ:ಮುಂಡಗೋಡ ಕೆರೆಯಲ್ಲಿ ಮುಳಗಿ ಬಾಲಕ ಮೃತ್ಯು

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡನಲ್ಲಿ ಸುರಿದ ಭಾರೀ ಮಳೆಗೆ ಬಾಲಕನೋರ್ವ ಬಲಿಯಾಗಿದ್ದಾನೆ.


ಪರುಶುರಾಮ ಹನ್ಮಂತಪ್ಪ ದುರಮುರಗಿ(15) ಎಂಬ ಬಾಲಕ ತುಂಬಿದ ಕೆರೆ ನೋಡಲು ಹೋಗಿ , ಸಾಲಗಾವಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ನಿನ್ನೆ ಪರುಶುರಾಮ ಮನೆಗೆ ಬಾರದೆ ಹೋದಾಗ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಆಗ್ನಿ ಶಾಮಕದಳ ಮತ್ತು ಪೊಲೀಸರು ಹುಡುಕಾಟ ನಡಸಿದಾಗ ಸಲಗಾವಿ ಕೆರೆಯಲ್ಲಿ ಬಾಲಕನ ಶವ ದೊರೆತಿದೆ. ಕುಟುಂಬದವರ ರೋಧನ ಮುಗಿಲು ಮುಟ್ಟಿದೆ. ಶವವನ್ನು ಕುಟುಂಬಕ್ಕೆ ನೀಡಲಾಗಿದೆ.

Latest Indian news

Popular Stories