ಕಾರವಾರ : ಡಿಸೆಂಬರ್ 2023 ರಲ್ಲಿ ಶಿರೂರು ಎದುರಿನ ರಾಷ್ಟ್ರೀಯ ಹೆದ್ದಾರಿ 66 ಹೀಗಿತ್ತು. ಅಲ್ಲಿದ್ದ ಲಕ್ಷ್ಮಣ ನಾಯ್ಕ ಅವರ ಚಹಾದ ಅಂಗಡಿ , ಅದರ ಎದುರು ನಿಂತ ಗ್ಯಾಸ್ ಟ್ಯಾಂಕರಗಳು, ಲಾರಿಗಳು ಸಾಲಾಗಿ ನಿಲ್ಲುತ್ತಿದ್ದವು. ಈ ವಾಹನಗಳ ಚಾಲಕರು ಲಕ್ಷ್ಮಣ ನಾಯ್ಕರ ಚಹಾ ಅಂಗಡಿಯಲ್ಲಿ ಟಿಫಿನ್ ಮಾಡಿ, ಲಾರಿಗಳಲ್ಲಿ ವಿಶ್ರಾಂತಿಗೆ ಜಾರುತ್ತಿದ್ದರು. ಲಕ್ಷ್ಮಣ ನಾಯ್ಕ ಚಹಾ ಅಂಗಡಿ ಎದುರು ಅವರ ಮಕ್ಕಳಾದ ರೋಶನ್, ಅವಂತಿಕಾ ಆಟವಾಡುತ್ತಾ…ಅವರ ಮನೆಯ ಕಡೆಗೆ ಬರುವ ಅಪರೂಪದ ವಿಡಿಯೋ ಇದು. ಆದರೆ 16 ಜುಲೈ 2024 ರಂದು ಶಿರೂರು ಎದುರಿನ ಗುಡ್ಡ ಕುಸಿದು , ಮಕ್ಕಳು, ಹೋಟೆಲ್, ಟ್ರಕ್, ಗ್ಯಾಸ್ ಟ್ಯಾಂಕರ್, ಪಕ್ಕದ ಆಲದ ಮರ ಎಲ್ಲವನ್ನೂ ಕೊಚ್ಚಿಹೋಯ್ದಿದೆ. ಈಗ ಬದುಕು ಕಾಲಗರ್ಭ ಸೇರಿದೆ.
ಕಾಣೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ.
VIDEO: