ರಾಜರಾಜೇಶ್ವರಿ ದೇವಿಯ ಆಶೀರ್ವಾದದಿಂದ ಬೆಲ್ ಖಂಡಿತ ಸಿಗುತ್ತೆ : ದರ್ಶನ್ ಗೆ ಆತ್ಮಸ್ಥೈರ್ಯ ತುಂಬಿದ ತಾಯಿ ಮೀನಾ ತೂಗುದೀಪ

ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ನನ್ನು ತಾಯಿ ಮೀನಾ ತೂಗುದೀಪ, ಅಕ್ಕ ದಿವ್ಯಾ ಹಾಗೂ ಭಾವ ಸೇರಿ ಕುಟುಂಬ ಸದಸ್ಯರು ಗುರುವಾರ ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಈ ವೇಳೆ ಮಗನ ಸ್ಥಿತಿ ಕಂಡು ತಾಯಿ ಕಣ್ಣಿರು ಹಾಕಿದ್ದು, ದರ್ಶನ್‌ ಸಮಾಧಾನಮಾಡಿದ್ದಾರೆ.

ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ನಿನ್ನೆ ದರ್ಶನ ಅವರನ್ನು ಭೇಟಿ ಮಾಡಲು ತಾಯಿ ಮೀನಾ ತೂಗುದೀಪ ಅಕ್ಕ, ಭಾವ, ಹಾಗೂ ಸೋದರ ಅಳಿಯ ಜೈಲಿಗೆ ಬಂದಿದ್ದರು. ಈ ವೇಳೆ ತಾಯಿ ಮೀನಾ ತೂಗುದೀಪ್ ಅವರು ದರ್ಶನ್ಗೆ ಆತ್ಮಸ್ಥೈರ್ಯ ತುಂಬಿದ್ದಾರೆ ಎನ್ನಲಾಗಿದೆ.

ಪುತ್ರ ದರ್ಶನ್ ಗೆ ಆತ್ಮಸ್ಥೈರ್ಯ ತುಂಬಿರುವ ಮೀನಾ ತೂಗುದೀಪ್ ಕೆಟ್ಟಗಳಿಗೆ ನಡೆದಿರಬಹುದು. ನಿನ್ನ ಜೊತೆ ನಾವಿದ್ದೇವೆ ಎಂದು ಧೈರ್ಯ ತುಂಬಿದ್ದಾರೆ. ರಾಜರಾಜೇಶ್ವರಿ ದೇವಿಯ ಕೃಪೆಯಿಂದ ಬೇಲ್ ಸಿಗುತ್ತೆ. ತಾಯಿಯ ಮಾತಿನಿಂದ ಆರೋಪಿ ದರ್ಶನ್ ಧೈರ್ಯ ತೆಗೆದುಕೊಂಡಿದ್ದಾರೆ. ತಾಯಿ ಭೇಟಿಯ ಬಳಿಕ ಆರೋಪಿ ದರ್ಶನ ಲವಲವಿಕೆಯಿಂದ ಇದ್ದಾರೆ ಎನ್ನಲಾಗಿದೆ.

Latest Indian news

Popular Stories