ಕುಂದಾಪುರ: ಫೈನಾಶ್ಶಿಯರ್ ಹತ್ಯೆ

ಕುಂದಾಪುರ: ತಾಲೂಕು ವ್ಯಾಪ್ತಿಯ ಸಾಲ್ವಾಡಿಯಲ್ಲಿ ಶುಕ್ರವಾರ ಜುಲೈ 30 ರಂದು ತಡರಾತ್ರಿ ಒಬ್ಬ ಫೈನಾನ್ಶಿಯರ್ ಕೊಲೆಯಾಗಿರುವುದು ವರದಿಯಾಗಿದೆ.

ಮೃತನನ್ನು ಅಜೇಂದ್ರ ಶೆಟ್ಟಿ (33), ಯಡದಿ ಮತ್ಯಾಡಿ ಕೂಡಲ್ ನಿವಾಸಿ ಎಂದು ಗುರುತಿಸಲಾಗಿದೆ.

ತಡರಾತ್ರಿಯವರೆಗೂ ಅಜೇಂದ್ರ ಮನೆಗೆ ಹಿಂತಿರುಗದ ಕಾರಣ, ಆತನ ಕುಟುಂಬ ಸದಸ್ಯರು ಸ್ನೇಹಿತರೊಂದಿಗೆ ಸೇರಿ ಹುಡುಕಾಡಿದ್ದಾರೆ.ಆ ಸಂದರ್ಭದಲ್ಲಿ ಅಜೇಂದ್ರ ಅವರು ಕೆಲಸ ಮಾಡುತ್ತಿದ್ದ ‘ಡ್ರೀಮ್ ಫೈನಾನ್ಸ್’ ಕಚೇರಿ ಒಳಗೆ ಅಜೇಂದ್ರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೃತರು ಕಳೆದ ಏಳು ವರ್ಷಗಳಿಂದ ಹಣಕಾಸು ವ್ಯವಹಾರದಲ್ಲಿದ್ದರು ಎನ್ನಲಾಗಿದೆ.ಈ ಸಂಬಂಧ ಕುಂದಾಪುರ ಗ್ರಾಮಾಂತರ ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories