ಕಾರವಾರ : ಜೊಯಿಡಾ ತಾಲ್ಲೂಕಿನ ಲಾಂಡೇ ಗ್ರಾಮದ ಅರ್ಜುನ್ ಪೋನೋ ವೇಳಿಪ್ (65) ಎಂಬ ವಯೋವೃದ್ಧರ ಮೇಲೆ ಕರಡಿ ದಾಳಿ ನಡೆದಿದೆ.
ಅರ್ಜುನ್ ಹೊಲಕ್ಕೆ ತೆರಳುತ್ತಿದ್ದ ವೇಳೆ ಈ ದಾಳಿ ನಡೆದಿದೆ. ಅಣಶಿ ಅರಣ್ಯ ವಲಯದಲ್ಲಿ ಬರುವ ಲಾಂಡೇ ಗ್ರಾಮದ ನಿವಾಸಿ ಅರ್ಜುನ್ ವೇಳಿಪ್ ಗೆ ಕಾರವಾರ ಕ್ರಿಮ್ಸ ಆಸ್ಪತ್ರೆಯಲ್ಲಿ ಪ್ರಥಮಚಿಕಿತ್ಸೆ ನೀಡಿ , ಮಂಗಳೂರು ಆಸ್ಪತ್ರೆಗೆ ಕಳುಹಿಸಲಾಗಿದೆ. ಕರಡಿ ದಾಳಿಯಲ್ಲಿ ಅರ್ಜುನ್ ವೇಳಿಪ ಕಣ್ಣು, ಹೊಟ್ಟೆ ,ಮುಖ ಭಾಗಕ್ಕೆ ಗಾಯಗಳಾಗಿದ್ದು , ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಅಣಶಿ ವಲಯದ ಅರಣ್ಯಾಧಿಕಾರಿ ಗಣರಾಜ ಪಟಗಾರ ಗಾಯಾಳುವಿಗೆ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಹುಲಿ ಸಂರಕ್ಷಿತ ಅರಣ್ಯದಲ್ಲಿ ಕರಡಿ ದಾಳಿ ಆಗಾಗ ನಡೆಯುತ್ತಿದ್ದು, ಈಚಿನ ದಿನಗಳಲ್ಲಿ ನಡೆದ ಭೀಕರ ದಾಳಿ ಇದಾಗಿದೆ. ವನ್ಯ ಜೀವಿ ಮತ್ತು ಮಾನವ ಸಂಘರ್ಷ ಜೊಯಿಡಾ ತಾಲ್ಲೂಕಿನಲ್ಲಿ ಕೇಳಿ ಬರತೊಡಗಿದೆ.
…..