ಭಾರತದಲ್ಲಿ ದ್ವೇಷಪೂರಿತ ವರ್ತನೆಗಳು ಮೀತಿ ಮೀರುತ್ತಿದ್ದು ಇದೀಗ ಮುಸ್ಲಿಮ್ ಮೆಹೆಂದಿ ಅರ್ಟಿಸ್ಟ್ ಗಳನ್ನು ವಿರೋಧಿಸುವ ವೀಡಿಯೋವೊಂದು ವೈರಲಾಗಿದೆ.
ಕೆಲವೊಂದು ಬಲಪಂಥೀಯ ಜನರು ಕೈಯಲ್ಲಿ ದೊಣ್ಣೆ ಹಿಡಿದು ಆಕ್ಷೇಪಾರ್ಹ ಘೋಷಣೆ ಕೂಗುತ್ತ ಮುಸ್ಲಿಂ ಮೆಹೆಂದಿ ಆರ್ಟಿಸ್ಟ್’ಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಿಂದ ವರದಿಯಾಗಿದೆ.
ಮೆಹೆಂದಿ ಜಿಹಾದ್ ಹೆಸರಿನಲ್ಲಿ ವಿರೋಧ ವ್ಯಕ್ತಪಡಿಸುವುದನ್ನು ವೀಡಿಯೋದಲ್ಲಿ ಗಮನಿಸಬಹುದಾಗಿದರ.ಕರ್ವಾ ಚೌತ್ನಂದು ಯಾವುದೇ ಮುಸ್ಲಿಂ ವ್ಯಕ್ತಿ ತನ್ನ ಗುರುತನ್ನು ಮರೆಮಾಚಿ ಮೆಹೆಂದಿ ಹಚ್ಚುವುದು ಕಂಡುಬಂದರೆ, ಈ ಕೋಲುಗಳಿಂದ ಅವರಿಗೆ ಪಾಠ ಕಲಿಸುತ್ತೇವೆ ಎಂದು ಹಿಂದೂ ಸಂಘಟನೆಯ ಈ ಜನರು ಘೋಷಣೆ ಕೂಗಿದ್ದಾರೆ.