ಕುಂದಾಪುರ: ಹಿಟ್ ಆ್ಯಂಡ್ ರನ್ | ಅಪಘಾತದಲ್ಲಿ ಲಾರಿ ಚಾಲಕ ಮೃತ್ಯು

ಕುಂದಾಪುರದಲ್ಲಿ ಲಾರಿ ಚಾಲಕ ಲಾರಿಯ ಪಂಚರ್ ಆದ ಟಯರ್ ಸರಿ ಪಡಿಸುತ್ತಿರುವ ಸಂದರ್ಭದಲ್ಲಿ ಅತೀ ವೇಗದಿಂದ ಬಂದ ಕಾರು ಬಡಿದ ಕಾರಣ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತರನ್ನು ಲಾರಿ ಚಾಲಕ ಲಾಡ ಸಾಬ್ ನದಾಫ್ ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ 10:00 ಗಂಟೆಗೆ ಕೋಟೇಶ್ವರ – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುವಾಗ ಲಾರಿಯ ಬಲ ಬದಿಯ ಮುಂದಿನ ಎರಡನೇ ಚಕ್ರದ ಟಯರ್ ಪಂಚರ್ ಆಗಿದ್ದು ಕುಂದಾಪುರ ತಾಲುಕು ಕೋಟೇಶ್ವರದ ಅಂಕದಕಟ್ಟೆ ಸಹನಾ ಕನ್ಸ್ರಕ್ಷನ್ ಹಾಲ್ ಎದುರು ಹಾದು ಹೋದ ರಾಷ್ಟ್ರೀಯ ಹೆದ್ದಾರಿ 66 ಪಶ್ಚಿಮ ಬದಿಯ ರಸ್ತೆಯ ಎಡ ಬದಿಗೆ ನಿಲ್ಲಿಸಿ ಪಾರ್ಕಿಂಗ್ ಲೈಟ್ ಹಾಗೂ ಹಿಂದಿನ ವಾಹನಕ್ಕೆ ತಿಳಿಯುವ ಹಾಗೇ ಸಿಗ್ನಲ್ ಲೈಟ್  ಹಾಕಿ ಟಯರ್ ಚೆಕ್ ಮಾಡುತ್ತಿರುವಾಗ ಕೋಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಕಾರೊಂದು ಲಾರಿ ಚಾಲಕ ಲಾಡಸಾಬ್ ನದಾಪ ರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಲಾಡಸಾಬ್ ನದಾಪ ರಸ್ತೆಗೆ ಬಿದ್ದು ಅವರ ತಲೆಗೆ ಹಾಗೂ ಎರಡೂ ಕಾಲಿಗೆ ತೀವ್ರ ಸ್ವರೂಪದ ರಕ್ತಗಾಯ ಆಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು  ಹೋದಾಗ  ಅಲ್ಲಿನ ವೈದ್ಯರು ಗಾಯಾಳು ಲಾಡಸಾಬ್ ನದಾಪರನ್ನು ಪರಿಕ್ಷೀಸಿ ರಾತ್ರಿ 10:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಅಫಘಾತಪಡಿಸಿದ ಕಾರಿನ ಚಾಲಕ ತನ್ನ ಕಾರನ್ನು ನಿಲ್ಲಿಸದೇ ಹೋಗಿರುತ್ತಾನೆ. ಅಫಘಾತಪಡಿಸಿದ ಕಾರು ಬಿಳಿ ಬಣ್ಣದ್ದಾಗಿದ್ದು ಅದರ ನಂಬ್ರ ತಿಳಿದಿರುವುದಿಲ್ಲ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2024 ಕಲಂ: 279, 304(A)  ಐಪಿಸಿ & 134 (A)&(B)IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories