ರಾಜ್ ಗುರು ಫುಡ್ ಇಂಡಸ್ಟ್ರೀಜ್ ನಲ್ಲಿ ಭೀಕರ ದುರಂತ: ಐವರು ಕಾರ್ಮಿಕರ ಸಾವು, ಮುಂದುವರೆದ ಕಾರ್ಯಾಚರಣೆ

ವಿಜಯಪುರ: ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಗುರು ಫುಡ್ ಇಂಡಸ್ಟ್ರೀಜ್ ನ ಗೋದಾಮಿನಲ್ಲಿ ನಡೆದಿರುವ ದುರಂತದಲ್ಲಿ ಸಿಲುಕಿರುವ ಕಾರ್ಮಿಕರಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಬೆಳಿಗ್ಗೆ 10ಗಂಟೆಯವರೆಗೆ 9 ಜನರನ್ನು ಹೊರತೆಗಯಲಾಗಿದ್ದು ಇದರಲ್ಲಿ ಐವರು ಸಾವನಪ್ಪಿದ್ದು ಇನ್ನುಳಿದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇನ್ನು 4 ರಿಂದ 5 ಜನ ಇದರಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.

ಇನ್ನು ಕಲಬುರಗಿಯ ಎಸ್.ಡಿ.ಆರ್.ಎಫ್ ತಂಡ ಶೋಧ ಕಾರ್ಯಾಚರಣೆಗೆ ಕೈ ಜೋಡಿದ್ದಾರೆ. 26 ಜನರ ತಂಡದಿಂದ ಸಂಸ್ಕರಣಾ ಯುನಿಟ್ ಕೆಳಗೆ ಸಿಲುಕಿರುವ ಕಾರ್ಮಿಕರ ಮೃತ ದೇಹಗಳು ಹುಡುಕಾಟ ಮಾಡುತ್ತಿದ್ದಾರೆ.

Latest Indian news

Popular Stories