ವಿಜಯಪುರ: ವಿಜಯಪುರದ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ ಗುರು ಫುಡ್ ಇಂಡಸ್ಟ್ರೀಜ್ ನ ಗೋದಾಮಿನಲ್ಲಿ ನಡೆದಿರುವ ದುರಂತದಲ್ಲಿ ಸಿಲುಕಿರುವ ಕಾರ್ಮಿಕರಲ್ಲಿ ಐವರು ಕಾರ್ಮಿಕರು ಸಾವನ್ನಪ್ಪಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಬೆಳಿಗ್ಗೆ 10ಗಂಟೆಯವರೆಗೆ 9 ಜನರನ್ನು ಹೊರತೆಗಯಲಾಗಿದ್ದು ಇದರಲ್ಲಿ ಐವರು ಸಾವನಪ್ಪಿದ್ದು ಇನ್ನುಳಿದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಇನ್ನು 4 ರಿಂದ 5 ಜನ ಇದರಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಕಲಬುರಗಿಯ ಎಸ್.ಡಿ.ಆರ್.ಎಫ್ ತಂಡ ಶೋಧ ಕಾರ್ಯಾಚರಣೆಗೆ ಕೈ ಜೋಡಿದ್ದಾರೆ. 26 ಜನರ ತಂಡದಿಂದ ಸಂಸ್ಕರಣಾ ಯುನಿಟ್ ಕೆಳಗೆ ಸಿಲುಕಿರುವ ಕಾರ್ಮಿಕರ ಮೃತ ದೇಹಗಳು ಹುಡುಕಾಟ ಮಾಡುತ್ತಿದ್ದಾರೆ.