ಉಡುಪಿ: ರೈಲಿನಿಂದ ಇಳಿಯವಾಗ ಬಿದ್ದು ಕೈ ಮುರಿದುಕೊಂಡ ವಿದ್ಯಾರ್ಥಿನಿಯ ರಕ್ಷಣೆ

ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿವಾಗ ಆಯಾತಪ್ಪಿ ಬಿದ್ದು, ಕೈಮುರಿತಗೊಂಡ ವೈದ್ಯಕೀಯ ವಿದ್ಯಾರ್ಥಿನಿಯನ್ನು ರಕ್ಷಿಸಿ, ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕಾರ್ಯಚರಣೆಗೆ ರೈಲ್ವೆ ಮಹಿಳಾ ಆರ್ ಪಿ. ಎಫ್ ಸಹಕರಿಸಿದ್ದಾರೆ.

ರಕ್ಷಿಸಲ್ಪಟ್ಟ ವಿದ್ಯಾರ್ಥಿನಿಯನ್ನು ಕೇರಳ ಪಾಲಕಾಡಿನ ಅನುಶ್ರೀ ಬಿ. (22ವ) ಎಂದು ಗುರುತಿಸಲಾಗಿದೆ. 

ವಿದ್ಯಾರ್ಥಿನಿಯು ರೈಲು ನಿಲುಗಡೆ ಬಂದಾಗ ನಿದ್ದೆಯ ಮಂಪರಿನಲ್ಲಿದ್ದರು, ರೈಲು ನಿಲುಗಡೆ ನೀಡಲು ನಿಧಾನಗತಿಯಲ್ಲಿ ಚಲಿಸುತ್ತಿರುವಾಗ ಇಳಿದರಿಂದ ಅವಘಡ ಸಂಭವಿಸಿತೆಂದು ತಿಳಿದುಬಂದಿದೆ.

Latest Indian news

Popular Stories